ಬ್ರೇಕಿಂಗ್ ನ್ಯೂಸ್: ಧಾರವಾಡದಲ್ಲಿ ಯುವಕರ ಉಗ್ರ ಹೋರಾಟಕ್ಕೆ ಮಣಿದ ಸರ್ಕಾರ 24ಸಾವಿರ ಹುದ್ದೆಗಳ ನೇಮಕಾತಿ ಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ
BREKING NEWS ಉದ್ಯೋಗಾಕಾಂಸಿಗಳ ಧೀರ್ಘಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ ಧಾರವಾಡದಲ್ಲಿ ಯುವಕರು ನಡೆಸಿದ ಉಗ್ರ ಪ್ರತಿಭಟನೆಗೆ ಮಣಿದಿರುವ ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಬರೋಬ್ಬರಿ 25000 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಮೂಲಕ ಅಧಿಕೃತ ಮಂಜೂರಾತಿ ನೀಡಿದೆ
ಪ್ರತಿಭಟನೆಯ ಕಿಚ್ಚಿಗೆ ಮಣಿದ ರಾಜ್ಯ ಸರ್ಕಾರ
ಕಳೆದ ಕೆಲವು ದಿನಗಳಿಂದ ಧಾರವಾಡದಲ್ಲಿ ಸಾವಿರಾರು ಯುವಕರು ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದರು
ಉದ್ಯೋಗಾಕಾಂಸಿಗಳ ಈ ಆಕ್ರೋಶದ ಬಿಸಿ ಸರ್ಕಾರಕ್ಕೆ ತಟ್ಟಿದೆ .ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರೆ ಇದರ ಬೆನ್ನಲ್ಲೇ ಆರ್ಥಿಕ ಇಲಾಖೆಯ ನೇಮಕಾತಿ ಪ್ರಕ್ರಿಯೆಗೆ ಅಗತ್ಯವಿರುವ ಆರ್ಥಿಕ ಕ್ಲಿಯರೆನ್ಸ್ ನೀಡುವ ಮೂಲಕ ನಿರುದ್ಯೋಗಿಗಳಲ್ಲಿ ಹೊಸ ಭರವಸೆ ಮೂಡಿಸಿದೆ
ಯಾವ ವರ್ಗಕ್ಕೆ ಎಷ್ಟೆಷ್ಟು ಹುದ್ದೆಗಳು
ಒಟ್ಟು 32ಇಲಾಖೆಗಳಲ್ಲಿ ಈ ನೇಮಕಾತಿ ನಡೆಯಲಿದ್ದು ಹುದ್ದೆಗಳ ವರ್ಗೀಕರಣದ ವಿವಿರ ಹೀಗಿದೆ
ಗ್ರೇಡ್ -A :- ಎ ದರ್ಜೆ ಹುದ್ದೆಗಳು 620
ಗ್ರೇಡ್ – B:- ಬಿ ದರ್ಜೆ 540
ಗ್ರೇಡ್ – FDC:- ಎಫ್ ಡಿ ಸಿ. ದರ್ಜೆ ಹುದ್ದೆಗಳು 23100
ಒಟ್ಟು ಮಂಜೂರಾದ ಹುದ್ದೆಗಳು 24400 ಗಿಂತ ಹೆಚ್ಚಿನ ಹುದ್ದೆಗಳು ಮಂಜೂರಾಗಿದೆ
ವಯೋಮಿನಿ ಸಡಿಲಿಕೆ ಉದ್ಯೋಗಾಕಾಂಸಿಗಳಿಗೆ ಬಿಗ್ ರಿಲೀಫ್
ಈ ನೇಮಕಾತಿಯಲ್ಲಿ ಮತ್ತೊಂದು ವಿಶೇಷವೆಂದರೆ ರಾಜ್ಯ ಸಿವಿಲ್ ಸಮ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಲಾಗಿದೆ ಈ ಸೌಲಭ್ಯವು 2027 ರ ಡಿಸೆಂಬರ್ 31 ರವರೆಗೆ ಹೊರಡಿಸಲಾಗುವ ಎಲ್ಲ ಅಧಿಕೃತ ಅಧಿಸೂಚನೆಗಳಿಗೆ ಅನ್ವಯವಾಗಲಿದೆ ಇದರಿಂದಾಗಿ ಓವರ್ ಏಜ್ ಬೀತಿಯಲಿದ್ದ ಲಕ್ಷಾಂತರ ಯುವಕರಿಗೆ ಸರ್ಕಾರಿ ಕೆಲಸ ಪಡೆಯಲು ಮತ್ತೊಂದು ಸುವರ್ಣ ಅವಕಾಶ ಸಿಕ್ಕಂತಾಗಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ
ಈ ಕುರಿತು ಪ್ರತಿಕಿಯಸಿರುವ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಇವುಗಳನ್ನ ಹಂತ ಹಂತವಾಗಿ ಭರ್ತಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ನಾವು ಅಧಿಕಾರಕ್ಕೆ ಬಂದಾಗ 2.65 ಲಕ್ಷ ಹುದ್ದೆಗಳು ಖಾಲಿ ಇದ್ದವು ಇದು ಹಿಂದಿನ ಸರ್ಕಾರದ ವೈಫಲ್ಯದಿಂದ ಉಂಟಾದ ಹಿನ್ನಡೆ ಪ್ರತಿ ಪಕ್ಷಗಳು ವಿದ್ಯಾರ್ಥಿಗಳನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ತಿರುವುದು ಸರಿಯಿಲ್ಲ ಎಂದು ಕಿಡಿಕಾರಿದ್ದಾರೆ
ಉದ್ಯೋಗಾಕಾಂಸಿಗಳು ಆತಂಕ ಮತ್ತು ಕನಸುಗಳು ನಮಗೆ ಅರ್ಥವಾಗುತ್ತವೆ ಯುವಜನರ ಭವಿಷವೇ ನಮ್ಮ ಆಧ್ಯತೆ ಎಂದು ಸಿಎಂ ಭರವಸೆ ನೀಡಿದರೆ
ಪ್ರಮುಖ ಅಂಶಗಳು ಮತ್ತು
ಈಗಾಗಲೇ ಆರ್ಥಿಕ ಇಲಾಖೆ ಕ್ಲಿಯರೆನ್ಸ್ ನೀಡಿರುವುದರಿಂದ ಮುಂದಿನ ಕೆಲವು ತಿಂಗಳ ಆಯಾ ಇಲಾಖೆಗಳಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಲಿವೆ ಅಭ್ಯರ್ಥಿಗಳು ಈಗಿನಿಂದಲೇ ಓದಿನಕಡೆಗೆ ಗಮನ ಹರಿಸುವುದು ಒಳಿತು
ಗಮನಿಸಿ
ನೋಟಿಫಿಕೇಶನ್ ಬಂತು ಅಂತ ಖುಷಿಪದಡಿರಿ ಈ ಬಾರಿ ಸ್ಪರ್ಧೆ ತುಂಬ ಹೆಚ್ಚಿರುತ್ತದೆ
ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣಪತ್ರ ಹಾಗೂ
ಮಧ್ಯಮ/ಗ್ರಾಮೀಣ.ಅಭರ್ಥಿ ಪ್ರಮಾಣ ಪತ್ರಗಳನ್ನು ಕನ್ನಡ ಹಾಗೂ English ನಲ್ಲಿ ಅಪ್ ಟು ಡೆಟ್ ಆಗಿವೆಯೇ ಎಂದು ಪರೀಕ್ಷಿಸಿಕೊಳ್ಳಿ ಅಧಿಸೂಚನೆ ಬಂದ ಮೇಲೆ ಸರ್ವರ್ ಬ್ಯುಸಿಯಾಗಿ ಸರ್ಟಿಫಿಕೇಟ್ ಸಿಗದೆ ಪರದಾಡುವುದಕ್ಕಿಂತ ಈಗಿನಿಂದಲೇ ರೆಡಿ ಇಟ್ಟುಕೊಳ್ಳುವುದು ಜಾಣತನ
ರಾಜ್ಯದ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ
56000ಸರ್ಕಾರಿ ಹುದ್ದೆಗಳ ಭರ್ತಿಗೆ ಮುಹೂರ್ತ ಪಿಕ್ಸ್ ಸಚಿವ ಸಂತೋಷ್ ಲಾಡ್ ಘೋಷಣೆ
ಧಾರವಾಡ: ಸರಕಾರಿ ಕೆಲಸದ ಕನಸು ಕಾಣುತ್ತಿರುವ ಕರ್ನಾಟಕದ ಲಕ್ಷಾಂತರ ಯುವ ಜನತೆಗೆ ರಾಜ್ಯಸರ್ಕಾರವು ಭರ್ಜರಿ ಉಡುಗೋರೆಯಂದನ್ನು ನೀಡಿದೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 56000 ಹೊಸ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸಲು ಸರ್ಕಾರ ಗ್ರಿನ್ ಸಿಗ್ನಲ್ ನೀಡಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ
ಧಾರವಾಡ ಐತಿಹಾಸಿಕ ಕರ್ನಾಟಕ ಕಾಲೇಜು (KCD) ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಕೌಶಲ್ಯಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಸಂತೋಷ್ ಲಾಡ್ ಅವರು ಸರ್ಕಾರವು ಯುವ ಜನತೆಗೆ ಉದ್ಯೋಗ ನೀಡಲು ಸಂಪೂರ್ಣ ಬದ್ಧವಾಗಿದೆ ಕೇವಲ ಕೆಲಸ ನೀಡುವುದಷ್ಟೇ ಅಲ್ಲದೆ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭರ್ಥಿಗಳು ಆಯಾ ಕಂಪನಿಗಳಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದರೆ ಎಂಬುದನ್ನು ನಿರಂತರವಾಗಿ ನಿಗಾ ವಹಿಸಲಾಗುವುದು ಎಂದರು ಅಲ್ಲದೆ ಇಲಾಖೆಯ ಕೆಲಸವನ್ನು ಇನ್ನೊಸ್ಟು ಸುಧಾರಿಸಲು ಅಭರ್ಥಿಗಳ ಪೀಡ್ ಬ್ಯಾಕ್ ಅತ್ಯಗತ್ಯ ಎಂದು ಅವರ ಅಭಿಪ್ರಾಯವನ್ನು ತಿಳಿಸಿದರು